‘ಮುತ್ತುಪ್ಪಾಡಿ’ ಸೃಷ್ಟಿಯಾದದ್ದು ಹೀಗೆ…

Posted on October 28, 2008. Filed under: ಬುಕ್ ಬಝಾರ್, ಬ್ಲಾಗ್ ಮಂಡಲ |

ಮೂರು ದಶಕದ ಕತೆ

 

ಮೂವತ್ತು ವರ್ಷಗಳು ಕಳೆದು ಹೋದವು.`ಬದ್ದತೆಯೆಂಬುದು ಸೃಜನಶೀಲತೆಗೆ ಮೊದಲ ಶತ್ರು, ಎಂಬ ಫಲಕ ತೂಗುತ್ತಿತ್ತು. ಪಕ್ಕದಲ್ಲಿ, `ಬರಹದಿಂದ ಬದುಕು ಬದಲು ಮಾಡಲಾಗದು’ ಎಂಬ ವಾದವನ್ನು ಸುಳ್ಳು ಮಾಡುತ್ತಿದ್ದ, ಹಲವು ನಿಲುವುಗಳಿಗೆ ಬದ್ದವಾದ, ಧರ್ಮಗ್ರಂಥಗಳು ಕಣ್ಣೆದುರಿಗಿದ್ದವು. ಆದ್ದರಿಂದ, ಕೆಲವು ಸೂತ್ರಗಳಿಗೆ ಬದ್ದನಾಗಿಯೇ ನಾನು ಬರವಣಿಗೆ ಆರಂಭಿಸಿದ್ದೆ; ಯಾಕೆಂದರೆ ನನ್ನೆದುರು ಎರಡು ಗುರಿಗಳಿದ್ದವು.

 

ಕನ್ನಡದ ಓದುಗರಿಗೆ ಅಷ್ಟೇನೂ ಪರಿಚಿತವಲ್ಲದ ಜನಸಮೂಹವೊಂದನ್ನು (ಅವರನ್ನು ದ್ವೀಪವೆಂದೂ ಕರೆಯಲಾಗುತ್ತಿತ್ತು) `ಹೌದಾ, ಅವರು ಹಾಗಿಲ್ಲವಾ? ಎಂಬಂತೆ ಉಳಿದವರಿಗೆ ಪರಿಚಯಿಸುವುದು ಮೊದಲ ಗುರಿ. ಅಂತೆಯೇ, ಕನ್ನಡದ ಓದಿಗೆ ಬಹುಪಾಲು ಕರುಡಾಗಿದ್ದ ಅದೇ ಜನಸಮೂಹವನ್ನು ಓದುವಂತೆ ಪ್ರೇರೇಪಿಸಿ `ಹೌದಾ? ನಾವು ಹೀಗಿದ್ದೇವಾ?, ಎಂದು ಪ್ರಶ್ನಿಸಿಕೊಳ್ಳುವಂತೆ ಒತ್ತಾಯಿಸುವುದು ಎರಡನೆಯ ಗುರಿ. ಒಟ್ಟಿನಲ್ಲಿ ಎರಡು ದೋಣಿಗಳಲ್ಲಿ ಕಾಲಿರಿಸಿ ಹುಟ್ಟು ಹಾಕುವ ಹುಚ್ಚು ಹಂಬಲ. ಕಾಲು ಶತಮಾನದ ಸುದೀರ್ಘ ಯೋಜನೆ ಅದು. ಅದಕ್ಕಾಗಿ ಅಷ್ಟು ಕಾಲ ನಾನು ಬದುಕುಳಿಯಲೇ ಬೇಕಾಗಿತ್ತು: ಬೇರೆಯವರ ಉಸಾಬರಿ ಬೇಡವೆಂದು ನನ್ನದೇ ಆದ `ಮುತ್ತುಪ್ಪಾಡಿ’ಎಂಬ ಗ್ರಾಮವನ್ನು ಕಲ್ಪಿಸಿದೆ.

೩೦ ವರ್ಷಗಳ ಹಿಂದೆ ಬೊಳುವಾರು ಮಹಮದ್ ಕುಂಇ ದೇವರುಗಳ ರಾಜ್ಯದಲ್ಲಿ ಕಥಾ ಸಂಕಲನ ಹೊರತಂದರು. ಅಷ್ಟೆ ಅಲ್ಲ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಸಂವೇದನೆಯ ಗಾಳಿ ಬೀಸಲು ಕಾರಣರಾದರು. ಈಗ ಡಾ ಎಂ ಭೈರೇಗೌಡ ತಮ್ಮ ಪ್ರಗತಿ ಗ್ರಾಫಿಕ್ಸ್ ಮೂಲಕ ಈ ಪುಸ್ತಕ ಮತ್ತೆ ಬೆಳಕು ಕಾಣಲು ಕಾರಣರಾಗಿದ್ದಾರೆ.

ಈ ಸಂದರ್ಭದಲ್ಲಿ ಬೊಳುವಾರು ಮೆಲುಕು ಹಾಕಿದ ನೆನಪುಗಳ ಸಂಪೂರ್ಣ ಓದಿಗೆ ಭೇಟಿ ಕೊಡಿ- ಓದುಬಜಾರ್

Make a Comment

Make a Comment: ( None so far )

blockquote and a tags work here.

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...