ಳು. ನಾವು ನಿರೀಕ್ಷಿಸಿದಂತೆ, ಪತ್ರಕರ್ತ ಸಮೂಹವೇ ಬ್ಲಾಗ್ ನ ಬಹುತೇಕ ಓದುಗರು. ಬ್ಲಾಗ್ ಗೆ ಭೇಟಿ ಕೊಟ್ಟವರೆಲ್ಲ, view my complete profile ಮೇಲೆ ಮರೆಯದೆ ಕ್ಲಿಕ್ ಮಾಡಿದರು. ಖಾಲಿ-ಖಾಲಿ ಇದ್ದದ್ದನು ಕಂಡು ‘ಯಾರಿರಬಹುದು’ ಎಂದು ಲೆಕ್ಕಾಚಾರಕ್ಕೆ ಶುರುಹಚ್ಚಿದರು.ಬೆಕ್ಕಿನ ಕೊರಳಿಗೆ ಗಂಟೆ
ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದು ಸುಲಭದ ವಿಚಾರವೇನೂ ಅಲ್ಲ. ಅದರಲ್ಲೂ ಮಾಧ್ಯಮವೆಂಬ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದು ಇನ್ನೂ ಕಷ್ಟದ ಕೆಲಸ.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುತ್ತದೆ. ಹಾಗೆ ಕುಡಿದಾಗಲೆಲ್ಲಾ ಅದು ಬೇರೆಯವರಿಗೆ ಗೊತ್ತಾಗಿಲ್ಲ ಎಂದುಕೊಳ್ಳುತ್ತದೆ. ಬೆಕ್ಕು ಹಾಗೆ ಭಾವಿಸಿದೆ ಅಷ್ಟೆ.‘ಸುದ್ದಿಮಾತು’ ಎಂಬ ಅವರೇ ಘೋಷಿಸಿಕೊಂಡ ಹಾಗೆ ಐವರು ಪತ್ರಕರ್ತರ ಬಳಗ ಈಗ ಮಾಧ್ಯಮದ ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯಲು ಹೊರಟಿದೆ.
ಮಂಗಳೂರಿನಲ್ಲಿ ಈ ಹಿಂದೆ ವಾರೆ-ಕ್ವಾರೆ ಎನ್ನುವ ಪ್ರಯತ್ನ ಆಗಿತ್ತು. ಸುಧಾ ಆಕಾರದಲ್ಲಿ ಬರುತಿದ್ದ ಪತ್ರಿಕೆ ಮಾಧ್ಯಮಗಳ ಹುಳುಕುಗಳಿಗೆ ಒಂದಿಷ್ಟು ಬಿಸಿ ಮುಟ್ಟಿಸಿತ್ತು. ಆದರೆ ಆ ನಂತರ ಕಾಲ ಇನ್ನಷ್ಟು ಬದಲಾಯಿತು. ಮಾಧ್ಯಮಗಳ ಟ್ರಾಫಿಕ್ ಹೆಚ್ಚಾಯಿತು. ಇನ್ನಷ್ಟು ಗೊಂದಲ ಹೆಚ್ಚಾಗಿದೆ. ಅಂತಹ ಸಂದರ್ಭದಲ್ಲಿ ಸುದ್ದಿಮಾತು ತಲೆ ಎತ್ತಿದೆ.
ಇದು ಪುಟ್ಟ ಪ್ರಯತ್ನ ಖಂಡಿತಾ ಅಲ್ಲ. ಬೆಕ್ಕಿಗೆ ಪರಚುವುದು ಗೊತ್ತಿದೆ ಎಂದು ಗೊತ್ತಿದ್ದೂ ಗಂಟೆ ಕಟ್ಟಲು ಹೊರಟಿರುವುದು ಮೆಚ್ಚಬೇಕಾದ ವಿಚಾರ. ಸುದ್ದಿಮಾತು ಬರೆದದ್ದೆಲ್ಲಾ ಸರಿ ಎಂದೇನೂ ಭಾವಿಸಬೇಕಾಗಿಲ್ಲ. ಆದರೆ ಸುದ್ದಿಮಾತು ಒಂದಷ್ಟು ವಿಚಾರಗಳನ್ನ ಚರ್ಚೆಗಾಗಿ ಮುಂದಿಡುತ್ತಿದೆ ಎಂದು ಭಾವಿಸುವುದೇ ಆರೋಗ್ಯಕರ ಅನಿಸುತ್ತದೆ.
ಹಿಂದೆ ಪಿ ಸಾಯಿನಾಥ್, ಸುಧೀಂದ್ರ ಕುಲಕರ್ಣಿ ಮುಂಬೈನಲ್ಲಿ –ನಡೆಸುತ್ತಿದ್ದರು. ಅದು ಹುಟ್ಟುಹಾಕಿದ ಮಾಧ್ಯಮ ವಿಮರ್ಶಾ ಪ್ರಜ್ಞೆ ದೊಡ್ಡದು. ಸುದ್ದಿಮಾತು ತಾನೂ ವಿಮರ್ಶೆಗೆ ಒಳಗಾಗುವ ಒಂದು ಬ್ಲಾಗ್ ಎಂಬ ಎಚ್ಚರದೊಂದಿಗೆ ಎಚ್ಚರ ಮೂಡಿಸುವ ಸಾಹಸಕ್ಕೆ ಕೈಹಾಕಲಿ ಇದರೊಂದಿಗೆ ಸುದ್ದಿಮಾತು ಬಳಗ ಬರೆದ ಬರಹವೊಂದು ಇದೆ-
ಸುದ್ದಿಮಾತು ಸಂಪಾದಕೀಯ…
ಳು. ನಾವು ನಿರೀಕ್ಷಿಸಿದಂತೆ, ಪತ್ರಕರ್ತ ಸಮೂಹವೇ ಬ್ಲಾಗ್ ನ ಬಹುತೇಕ ಓದುಗರು. ಬ್ಲಾಗ್ ಗೆ ಭೇಟಿ ಕೊಟ್ಟವರೆಲ್ಲ, view my complete profile ಮೇಲೆ ಮರೆಯದೆ ಕ್ಲಿಕ್ ಮಾಡಿದರು. ಖಾಲಿ-ಖಾಲಿ ಇದ್ದದ್ದನು ಕಂಡು ‘ಯಾರಿರಬಹುದು’ ಎಂದು ಲೆಕ್ಕಾಚಾರಕ್ಕೆ ಶುರುಹಚ್ಚಿದರು.







ronald bathes na author is dead na chennagi aarivaguvanthe thilisiruva nimma sampadakiya mathugalige danyavaadagalu as bathes says birth of a reader at the of the author.
thanks for make me to remember his essay again.
eshakumar h n
October 6, 2008