Archive for September 23rd, 2008
ಶಾದಿ ಡಾಟ್ ಕಾಮ್, ಮೆಟ್ರಿಮೊನಿಯಲ್ ಕಾಲಂ ಹುಡುಕ್ತಾನೇ ಇರ್ತೀನಿ
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ…
ಇನ್ಯಾರಿಗೆ ಗಂಡು ಹುಡುಕ್ತಿದ್ದೀಯಾ
ನಿನಗೆ
ಹುಚ್ಚು ನಿಂಗೆ- ನಕ್ಕಳು ರಾಜಿ.
ನನಗೆ ವಿಶ್ವಾಸ ಇದೆ .ಈ ಬಾರಿ ಒಳ್ಳೇ ವರ ಸಿಕ್ಕೇ ಸಿಗ್ತಾನೆ.
ನಾನು ಫ್ರಸ್ಟ್ರೇಟೆಡ್ ಆಗಿದ್ದೀನಿ ಅಂತ ಅನ್ನಿಸ್ತಿದೆಯಾ ಸ್ವಲ್ಪ ಸಿಟ್ಟಿನಿಂದಲೇ ಕೇಳುತ್ತಾಳೆ
ನನ್ನನ್ನು ಇಷ್ಟೇನಾ ಅರ್ಥ ಮಾಡ್ಕೊಂಡಿದ್ದು ಎಂದು ನಾನೂ ಸಿಟ್ಟು ಪ್ರದರ್ಶಿಸುತ್ತೇನೆ.
35 ಆಗ್ಹೋಯ್ತಲ್ಲ. ಇನ್ನು ಯಾವ ಮಹಾನುಭಾವ ಬರ್ತಾನೆ? ಮತ್ತೆ ನಾನದರ ಬಗ್ಗೆ ವಿಚಾರ ಮಾಡ್ತಿಲ್ಲ. ಅಂಥ ಡಿಸೈರ್ ಇದ್ದಿದ್ದರೆ ನಾನೇ ಯಾರನ್ನಾದ್ರೂ ಇಟ್ಕೊತ್ತಿದ್ದೆ.ಇವನ್ನೆಲ್ಲ ಮೀರಿ ಬಂದಿದ್ದೇನೆ. ನಿನಗ್ಯಾಕೆ ಈ [...]
ಅಲ್ಲಿ ಚಪ್ಪಲಿಯೇ ದೇವರಾಗಿ ಬೆಳೆದು ನಿಂತಿತ್ತು!
ಏಷ್ಯಾನೆಟ್ ಸುವರ್ಣ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿರುವ ಶಶಿಧರ ಭಟ್ ಕನ್ನಡ ಪತ್ರಿಕೋದ್ಯಮದಲ್ಲಿ ಸಾಕಷ್ಟು ವರ್ಷ ಈಜಿದ್ದಾರೆ. ಈಟಿವಿ ಗಾಗಿ ‘ಬಾನಾಮತಿ’ ನಿರ್ದೇಶಿಸಿದ್ದಾರೆ.
ಆ ಬಾನಾಮತಿಯ ಚಿತ್ರೀಕರಣಕ್ಕೆ ಕರ್ನಾಟಕದ ಉದ್ದಗಲಕ್ಕೂ ಅಲೆದಾಡಿದಾಗ ಆದ ಅನುಭವಗಳನ್ನು ಈಗ ದಾಖಲಿಸುತ್ತಿದ್ದಾರೆ. ಅಂತಹ ಒಂದು ಅನುಭವವನ್ನು ತಮ್ಮ ಬರಲಿರುವ ಪುಸ್ತಕದಿಂದ ಆಯ್ದು ಕೊಟ್ಟಿದ್ದಾರೆ-
-ಶಶಿಧರ್ ಭಟ್
ಆ ಊರೆ0ಬ ಊರು. ಅಲ್ಲಿ ಬದುಕು ಬೀದಿಯಲ್ಲಿ ಬಿದ್ದು ಆಟವಾಡ್ತಾ ಇತ್ತು. ಟಾರು ಕಾಣದ ರಸ್ತೆಗಳು… ರಸ್ತೆಯ ಮೇಲೆ ಹರಿಯುವ ಚರ0ಡಿ ನೀರು. [...]
‘ಕೆ’ ಫಾರ್ ಕುಶಲೋಪರಿ
ತಮ್ಮ ಹೊಸತನದ ಕಥೆಗಳು ಹಾಗೂ ಮನಮುಟ್ಟುವ ಪ್ರಬಂಧಗಳ ಮೂಲಕ ಈಗಾಗಲೇ ಓದುಗರನ್ನು ತಲುಪಿರುವ ಕೆ ಸತ್ಯನಾರಾಯಣ ಈಗ ಬ್ಲಾಗ್ ಲೋಕದ ಬಾಗಿಲು ತಟ್ಟಿದ್ದಾರೆ. ಕುಶಲೋಪರಿ ಅವರ ಬ್ಲಾಗ್.
ಯು ಆರ್ ಅನಂತಮೂರ್ತಿ, ‘ಕಾಮರೂಪಿ’ ಪ್ರಭಾಕರ್, ಓ ಎಲ್ ಎನ್, ಕೆ ವಿ ನಾರಾಯಣ್ ಅವರು ಬ್ಲಾಗ್ ಮಂಡಲವನ್ನೂ ಕಟ್ಟಿದ್ದಾರೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವವರು ಸತ್ಯನಾರಾಯಣ. ಕಾಲಜಿಂಕೆ ಎಂಬ ಕಾದಂಬರಿ, ಈತನಕದ ಕಥೆಗಳು ರೀಸೆಂಟ್ ಪುಸ್ತಕಗಳು.
ಕೆ ಸತ್ಯನಾರಾಯಣ ಅವರ ಕಿ ರಂ ಕುರಿತ ಬರಹದೊಂದಿಗೆ ಅವರನ್ನು ಬ್ಲಾಗ್ ಮಂಡಲಕ್ಕೆ ಸ್ವಾಗತಿಸುತ್ತಿದ್ದೇವೆ-
ಕವಿ ರಿಲ್ಕೆ ಕಂಡ [...]


