Archive for September 21st, 2008
ಅವಧಿ ಕಣ್ಣಲ್ಲಿ ‘ಕಾಡ ಹಕ್ಕಿ’
ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ತೇಜಸ್ವಿ ಕುರಿತ ಉತ್ಸವದ ಎರಡನೆಯ ದಿನದ ನೋಟ ಇಲ್ಲಿದೆ-
ಇನ್ನೂ ಹಲವು ಫೋಟೋಗಳು ‘ಓದುಬಜಾರ್’ ನಲ್ಲಿ ಲಭ್ಯ. ಭೇಟಿ ಕೊಡಿ
ಚಿತ್ರಗಳು- ಎಂ ಜೆ ದೀಪಿಕಾ
`ಸಂಬಂಧ ಅನ್ನೋದು ದೊಡ್ಡದು ಕಣಾ’
ಅಕ್ಷತಾ ಕೆ
ದಣಪೆಯಾಚೆ…
ಮೊನ್ನೆ ಕಡಿದಾಳು ಶಾಮಣ್ಣನವರು ತಮ್ಮ ಬದುಕಿನ ಪುಟಗಳನ್ನು ತೆರೆದಿಡುತಿದ್ದ ಸಂದರ್ಭದಲ್ಲಿ ಈ ಘಟನೆ ಹೇಳಿದರು. ಪುಟ್ಟದಾದ ಈ ಘಟನೆ ನನ್ನಲ್ಲಿ ಹಲವು ನೆನಪುಗಳನ್ನು ಉಕ್ಕಿಸಿತು. ಹಲವು ವರ್ಷಗಳಿಂದ ಪರಸ್ಪರರನ್ನು ಅರಿತಿದ್ದ, ಪ್ರೇಮಿಸುತಿದ್ದ ಶಾಮಣ್ಣ-ಶ್ರೀದೇವಿ 1970 ರಲ್ಲಿ ಮದುವೆ ಮಾಡಿಕೊಂಡು ಭಗವತಿಕೆರೆಗೆ ಬಂದು ಸಂಸಾರ ಹೂಡುತ್ತಾರೆ.
ದಟ್ಟ ಕುರುಚಲು ಕಾಡಿನ, ಬೆಟ್ಟ ಗುಡ್ಡಗಳ, ನೀರಾವರಿ ಪ್ರದೇಶವಾದ ಈ ಊರಿನಲ್ಲಿ ಆಗ ಇದ್ದಿದ್ದು ಇವರ ಒಂದು ಗುಡಿಸಲು ಮಾತ್ರ. ನರಮನುಷ್ಯ ಸಂಚಾರವೇ ವಿರಳವಾಗಿದ್ದ ಊರಿನಲ್ಲಿ ಸಾಲು ಸಾಲು ಕರಡಿಗಳು, ಜಿಂಕೆಗಳು,ನರಿಗಳು [...]
ಓದುಬಜಾರ್ ಸ್ಪೆಷಲ್
ಬೆಕ್ಕು ಮತ್ತು ಬುಕ್ಕು
ಓದಿ – ಓದುಬಜಾರ್
ನೀಲು ಬಗ್ಗೆ ವಿಶೇಷ ನೋಟ- ಅನಿವಾಸಿ ಅವರಿಂದ
ಓದಿ- ಓದುಬಜಾರ್
ಬಾಲ್ಕನಿಯಲ್ಲಿ ನೆನಪುಗಳ ಸಂತೆ…
ಎಷ್ಟೊಂದು ಒಳ್ಳೆಯ ಬ್ಲಾಗ್ ಗಳು ಅರಳುತ್ತಿವೆ. ಒಂದಷ್ಟು ಒಳ್ಳೆಯ ಓದಿಗೆ ದಾರಿ ಮಾಡಿ ಕೊಡುತ್ತಿವೆ..ಇಂತಹ ಬ್ಲಾಗ್ ಸಾಲಿನಲ್ಲಿ ಬಂದು ನಿಂತಿದೆ ಕೆನೆ coffee. ಹೆಸರೂ ಭಿನ್ನ. ಬರಹವೂ ಅಷ್ಟೆ.
ಕಪಾಟಿನೊಳಗಿನದು ಹೊಸದೇ ಪ್ರಪಂಚ
ಯಾರದೋ ಗುಟ್ಟು, ಯಾರದೋ ಜಮೀನು ನಕ್ಷೆ
ಬಚ್ಚಿಟ್ಟು ಕಳೆದುಕೊಂಡ ಪ್ರೀತಿ,
ಕದ್ದು ನೋಡುವ ನಗ್ನ ಚಿತ್ರ
ಎಲ್ಲ ಬಯಲಾಗಿಬಿಡಬಹುದೇನೋ ….
ಇದು ಒಂದು ಸ್ಯಾಂಪಲ್. ಕೆನೆ coffee ರುಚಿಯನ್ನು ನೀವೇ ಸವಿಯಿರಿ-
ನಾನು ಮತ್ತು ಬಾಲ್ಕನಿ….
ಇವತ್ತು ಬಾಲ್ಕನಿ ಒದ್ದೆ ಒದ್ದೆ………
ಬೆಳಗಿನಿಂದಲೂ ಹೀಗೇ, ಮೂಡ್ ಆಫ್ ಮಾಡಿಕೊಂಡಂತಿರುವ ಆಕಾಶ.
ಇನ್ನೇನು ಅತ್ತೇ ಬಿಡುವಂತೆ……
ಮಳೆ ಬರುವ ಮುಂಚೆ ಕಪ್ಪಿಟ್ಟ [...]


