Archive for September 11th, 2008
‘ಹಾಡೇ ಹಾಡೇ ಬಾ..’
ಕನ್ನಡ ರಂಗಭೂಮಿ ನಾದದ ಒಂದು ನದಿಯನ್ನು ಸದಾ ತನ್ನ ಒಡೊಲೊಳಗೆ ಹುದುಗಿಸಿಕೊಂಡಿದೆ. ಬಿ ವಿ ಕಾರಂತರಂತೂ ರಂಗಭೂಮಿಯಲ್ಲಿ ಸಂಗೀತದ ಜಾದೂವನ್ನೇ ನಡೆಸಿದರು. ಆದರೆ ರಂಗಗೀತೆಗಳು ಇತರ ಮಾಧ್ಯಮಗಳಿಗೆ ತನ್ನನ್ನು ತೆತ್ತುಕೊಂಡದ್ದು ಕಡಿಮೆ.
ಕನ್ನಡ ರಂಗಭೂಮಿಯಲ್ಲಿ ರಂಗಗೀತೆಗಳನ್ನು ಹಿಡಿದಿಡುವ ಅಪರೂಪದ ಪ್ರಯತ್ನಗಳು ಆಗಿದೆಯಾದರೂ ಮತ್ತೆ ಮತ್ತೆ ಮೆಲುಕು ಹಾಕುವ ಅವಕಾಶ ನೀಡುವ ಮಾಧ್ಯಮಗಳನ್ನು ಬಳಸಿಕೊಂಡದ್ದು ಕಡಿಮೆ. ನಾಟ್ಯ ಸಂಘ ಕೈಲಾಸಂ ಗೀತೆಗಳನ್ನು ಕ್ಯಾಸೆಟ್ಗೆ ಒಗ್ಗಿಸಿತ್ತು. ಕಾಕನಕೋಟೆಗೆ ಸಿ ಅಶ್ವಥ್ ಸಂಗೀತ ಸಂಯೋಜಿಸಿ ಹಾಡಿದ ಹಾಡುಗಳು ರಂಗ ಹಾಗೂ ಸಿನೆಮಾ ಎರಡೂ [...]
ನಾನೇ ನಿಮ್ಮಪ್ಪ…
P For…
-ಲೀಲಾ ಸಂಪಿಗೆ
ಮೇಡಂ, ಪ್ರೀತೀನ ಕೇಳ್ಕೊಂಡು ಯಾರೋ ಬಂದಿದ್ದಾರೆ ಎಂದರು. ನನಗೆ ಶಾಕ್ ಆಯ್ತು. ಈ ಜಗತ್ತಿನಲ್ಲಿ ಈ ಪ್ರೀತಿ ಎನ್ನುವ ಹುಡುಗಿಗೆ ನಾನಿಲ್ಲದೆ ಯಾರೂ ಇಲ್ಲದ ಕಂದಮ್ಮ ಅಂತ ಫೀಲ್ ಮಾಡ್ತಿದ್ದೆ. ಯಾರು ಹುಟ್ಕೊಂಡ್ರು ಪ್ರೀತಿಗಾಗಿ? ಹೊರ ಬಂದು ನೋಡ್ದೆ. ಒಬ್ಬ ಗಂಡಸು ನಿಂತಿದ್ದ.’ನಮಸ್ಕಾರ ಅಮ್ಮ. ಸುಷ್ಮ ನಿಮ್ಮ ಬಗ್ಗೆ ಹೇಳಿದ್ಲು. ಅಮ್ಮ, ನನ್ನ ಮಗಳು ನನಗೆ ಬೇಕು. ಅವಳನ್ನ ಕರ್ಕೊಂಡು ಹೋಗೋಕೆ ಬಂದೆ’ ಅಂದ. ಒಂದು ಕ್ಷಣ ಅವಾಕ್ಕಾದೆ. ಕೂಡಲೇ ಹುಶಾರಾದೆ. ಯಾರು, ಸುಷ್ಮಾಳ [...]
ಓದುಬಜಾರ್ ಓದಿ
‘ಸಹಿಸುವುದೇ ಸರಿಯಾದ ರೀತಿ ಎಂಬ ವಾದದಲ್ಲಿ ಏನೋ ತಪ್ಪಿದೆ’
ನರೇಂದ್ರ ಪೈ ಉತ್ತರ-
ಓದಿ ಈಗಲೇ ‘ಓದುಬಜಾರ್’ನಲ್ಲಿ
ದಟ್ಟ ಮಲೆನಾಡಿನ ನೆನಪುಗಳು
ಓದಿ ಈಗಲೇ ‘ಓದುಬಜಾರ್’ನಲ್ಲಿ
ಸೋಗೆಮನೆಯ ‘ಅಕಾಲ’ ಕಥೆಗಳು
ರಮೇಶ್ ಸೋಗೆಮನೆ ಕಾಲವನ್ನು ಮೀರುವ ‘ಅಕಾಲ’ ಕಥೆಗಳನ್ನು ಬರೆದಿದ್ದಾನೆ. ಇದೆಲ್ಲಾ ಆತನಿಗೆ ಸಾಧ್ಯವಾದದ್ದು ಆತನ ಸದಾ ಮೌನ ಹಾಗೂ ಅಪಾರ ಓದಿನಿಂದ ಎನ್ನುತ್ತಾರೆ ಆತನ ಗೆಳೆಯರು. ಚಿಕ್ಕ ವಯಸ್ಸಿಗೆ ತಲ್ಲಣಗೊಳಿಸುವ ನೋಟ ನೀಡುತ್ತಿರುವ ಈತನ ಕಥೆಗಳ ಮತ್ತಷ್ಟು ಸ್ಯಾಂಪಲ್ ಇಲ್ಲಿದೆ.
ಜನ ಹೇಳಿದ್ದು
ಬಹಳ ವರ್ಷಗಳ ಕಾಲ ಸುಖಿಸಿ ಸಂಭೋಗಿಸಿ ಧ್ಯಾನಿಸಿದ ದೇಹ ತುಸು ವಿಶ್ರಾಂತಿ ಬೇಡಿತು. ಜನ ಅದನ್ನು ಸಾವು ಅಂದರು.
ನಟ
ಪ್ರೇಯಸಿ ಸತ್ತಿದ್ದಾಳೆ. ಅವನು ಅಳುತ್ತಿದ್ದಾನೆ. ಕೈಯಲ್ಲಿರುವುದು ಗ್ಲಿಸರಿನ್.
ಕಥೆ ಅರ್ಥವಾಗದಿದ್ದರೆ…
ಅಪ್ಪ ಬಹಳ ಹಿಂದೆ ಮಗನಿಗೆ ಹೇಳಿದ ಕಥೆ ಇದು. ಊರಿಗೆ [...]


