ತೇಜಸ್ವಿ ಎಂಬ ‘ಮೂಡಿಗೆರೆಯ ಮಾಯಾವಿ’
ತೇಜಸ್ವಿ ಎಂಬ ಮೂಡಿಗೆರೆಯ ಮಾಯಾವಿಗೆ ಈಗ ೭೦. ಪ್ರತಿಯೊಬ್ಬರಿಗೂ ಎಟುಕುವ ಮುಕ್ತ ವಿಶ್ವವಿದ್ಯಾಲಯವಾಗಿದ್ದ ತೇಜಸ್ವಿ ಎಲ್ಲರ ಮನೆ, ಮನದಂಗಳದಲ್ಲಿ ಇರಲಿ ಎಂಬ ಆಶಯದಿಂದ ‘ಅವಧಿ’ ಕನ್ನಡ ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಾದ ಪಿ ಮಹಮ್ಮದ್ ಹಾಗೂ ಗುಜ್ಜಾರ್ ಅವರ ತೇಜಸ್ವಿ ಚಿತ್ರಗಳನ್ನು ಪ್ರಕಟಿಸಿದೆ.
ಇದು ಎಷ್ಟು ಮುದ್ದಾಗಿ ಪ್ರಕಟವಾಗಿದೆ ಎಂದರೆ ಈಗಾಗಲೇ ಸುಮಾರು ೧೦೦೦ ಪ್ರತಿಗಳು ಮಾರಾಟವಾಗಿ ಹೋಗಿದೆ. ಆದರೆ ಕಡಿದಾಳು ಶಾಮಣ್ಣ, ಭಾರತ ಯಾತ್ರಾ ಕೇಂದ್ರದ ಬಿ ಎಲ್ ಶಂಕರ್, ಎಂ ಪಿ ಪ್ರಕಾಶ್ ವಿವಿಧ ಕಾರ್ಯಕ್ರಮಗಳಲ್ಲಿ ಈ ಕಾರ್ಡ್ ನೋಡಿ ಇನ್ನಷ್ಟು ಕಾರ್ಡ್ ಗಳಿಗೆ ಬೇಡಿಕೆ ಮುಂದಿಟ್ಟಿದ್ದಾರೆ. ಹಾಗಾಗಿ ತೇಜಸ್ವಿ ಕಾರ್ಡ್ ಮತ್ತೆ ಎರಡನೆಯ ಮುದ್ರಣಕ್ಕೆ ಸಜ್ಜಾಗುತ್ತಿದೆ.
3 ಕಾರ್ಡ್ ಗಳ ಒಂದು ಸೆಟ್ ಗೆ 30 ರೂ. ಬದಲಿಗೆ ಗೆಳೆಯರ ಬಳಿ ಇರಲಿ ಎಂಬ ಕಾರಣಕ್ಕೆ ಮೂರು ಕಾರ್ಡ್ ಗಳನ್ನೂ ತಲಾ 25 ರಂತೆ ಖರೀದಿಸಿದರೆ 750 ರೂ ಬದಲಿಗೆ 650 ರೂಪಾಯಿಗೆ ಈ ಕಾರ್ಡ್ ಗಳನ್ನು ನಿಮ್ಮ ಮನೆ ಬಾಗಿಲಿಗೆ ಕಳಿಸುತ್ತೇವೆ. ಡಿಡಿ ಯನ್ನು mayflower media house ಹೆಸರಿಗೆ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಕಳಿಸಿ. ವಿಳಾಸವನ್ನು mayflowermh@gmail.com ಗೆ ಮೇಲ್ ಮಾಡಿ.









