Archive for August 23rd, 2008
ಇಂದಿನ ಚಹಾ ಕೆಟ್ಟು ಹೋಗಿದೆ
ಇವತ್ತು ಕಳೆದೆರಡು ತಾಸುಗಳಿಂದ ಅವಧಿಯಲ್ಲಿರುವ ಭಾಮಿನೀ ಷಟ್ಪದಿ ಮತ್ತು ಲೀಲಾ ಸಂಪಿಗೆಯವರ ಎಲ್ಲಾ ಬರಹಗಳನ್ನು ಓದುತ್ತಿದ್ದೆ. ಜೊತೆಗೆ ಮೊನ್ನೆ ಓದಿದ ಹಕೂನ ಮಟಾಟ ಬೇರೆ ನೆನಪಾಗಿ ಬಿಡ್ತು.
ದಿನವೂ ಕೆಟಕಿಯ ಬಳಿ ಕೂತು ನಾನಿಟ್ಟ ಅಕ್ಕಿ ತಿನ್ನುವ ಗುಬ್ಬಚ್ಚಿಗಳು ಮತ್ತು ಕೆಳಗಡೆ ಆಡುತ್ತಿರುವ ಎಳಸುಗಳನ್ನು ಕಣ್ಣಲ್ಲೇ ತುಂಬಿಕೊಳ್ಳುತ್ತಾ ಚಹಾ ಹೀರುತ್ತಿದ್ದೆ.
ಇಂದಿನ ಚಹಾ ಕೆಟ್ಟು ಹೋಗಿದೆ.
[" Spirit of the heart, quietness and tranquility -- this is what links together the [...]
`ನೀನು ಯಾರ ಮಗ ?’
ಸುಧನ್ವಾ ದೇರಾಜೆಯ ‘ಚಂಪಕಾವತಿ’ ಬ್ಲಾಗ್ನಲ್ಲಿದ್ದ ಈ ಸ್ವಾರಸ್ಯಕರ ಬರಹ ನಿಮಗೂ ಇಷ್ಟವಾಗುತ್ತದೆ ಎಂಬ ನಂಬಿಕೆಯಿಂದ-
ಸುತ್ತ ನೆರೆದಿದ್ದ ಹಸ್ತಿನಾವತಿಯ ಸಮಸ್ತರ ಮಧ್ಯೆ, `ನೀನು ಯಾರ ಮಗ ?’ ಎಂಬ ಕೃಪಾಚಾರ್ಯರ ಪ್ರಶ್ನೆಯು, ಕರ್ಣನ ಕಿವಿಗಳಿಗೆ ಕಠೋರವಾಗಿಯೇ ಕೇಳಿತು। ಅವನ ಪರವಾಗಿ ಉತ್ತರಿಸುವದಕ್ಕೆ ಅಲ್ಲಿ ಯಾರೂ ಇರಲಿಲ್ಲ। ತಲೆತಗ್ಗಿಸಿದ, ಹಿಂಜರಿದ, ಮುಜುಗರದ ಮುದ್ದೆಯಾದ. `ನೀವು ದೇವತೆಗಳಿಂದಲೇ ಹುಟ್ಟಿದ ಪಾಂಡವರೇ?’ ಅಂತ ಯಾರೊಬ್ಬನೂ ಕೇಳಲಿಲ್ಲ. ಅವರ ಜತೆ ಋಷಿಗಳಿದ್ದರು, ಕುಂತಿಯಿದ್ದಳು. ಕಾಡಿನಿಂದ ಬಂದವರನ್ನು ಸೇರಿಸಿಕೊಂಡಿತು ಹಸ್ತಿನಾವತಿ . ದೊಡ್ಡವರ ಮಕ್ಕಳಾದರೆ ತಲೆಯೆತ್ತಿ [...]
Read Full Post | Make a Comment ( None so far )





