Archive for August 9th, 2008
ನಾನು ಮಲಗಿದ ಕ್ಷಣ, ನಿನ್ನ ಕಣ್ಣು ಮುಚ್ಚಿಕೊಳ್ಳುತ್ತವೆ
ನೆರುಡಾನ ಒಂದು ಪ್ರೇಮ ಪದ್ಯ
-ಅಲೆಮಾರಿ
ಉಪ್ಪಿನ ನೆಲದಲ್ಲಿ ಬೆಳೆದ ಗುಲಾಬಿ,
ಪುಷ್ಯರಾಗ, ಬೆಂಕಿಹೂ ನೀನೆಂದು
ನಾನು ನಿನ್ನನ್ನು ಪ್ರೀತಿಸುವುದಿಲ್ಲ,
ನಾನು ನಿನ್ನನ್ನು ಪ್ರೀತಿಸುತ್ತೇನೆ,
ನೆರಳು ಮತ್ತು ಆತ್ಮದ ನಡುವೆ ರಹಸ್ಯವಾಗಿ ಪ್ರೀತಿಸುವ ಗಾಢ ಸಂಗತಿಗಳ ಹಾಗೆ.
ನಾನು ನಿನ್ನ ಪ್ರೀತಿಸುತ್ತೇನೆ,
ಅರಳಿಸದಿದ್ದರೂ, ತನ್ನ ಹೂಗಳ ಬೆಳಕನ್ನು
ಬಚ್ಚಿಟ್ಟುಕೊಂಡ ಗಿಡದ ಹಾಗೆ,
ನಾನು ಋಣಿ,
ನನ್ನೊಳಗೆ ಬೆರೆತ
ನೆಲದಿಂದೇಳುವ ದಟ್ಟ ವಾಸನೆಯಂಥ
ನಿನ್ನ ಪ್ರೀತಿಗೆ.
ಹೇಗೆ ಅಥವಾ ಎಲ್ಲಿ ಅಥವಾ ಎಲ್ಲಿಂದ
ಎಂಬುದ ತಿಳಿಯದೇ ನಿನ್ನ ಪ್ರೀತಿಸುತ್ತೇನೆ,
ಸಮಸ್ಯೆ, ಗರ್ವಗಳಿಲ್ಲದೆ, ಸುಮ್ಮನೆ
ನಿನ್ನನ್ನು ಪ್ರೀತಿಸುತ್ತೇನೆ:
ನಾನು ನಿನ್ನನ್ನು ಹೀಗೇ ಪ್ರೀತಿಸುತ್ತೇನೆ
ಏಕೆಂದರೆ ನನಗೆ ಬೇರೆ ರೀತಿ ಗೊತ್ತಿಲ್ಲ.
ನಾನು ಅಥವಾ ನೀನು ಇಲ್ಲದ ಇದು
ತುಂಬಾ [...]
ಪ್ರಶ್ನೆಗೆ ಉತ್ತರ ಕೊಡಲೇಬೇಕಲ್ಲವೇ?
ಕಥೆಗಾರ ಎಂ. ವ್ಯಾಸ ನಿಧನರಾದ ಸುದ್ದಿಯು ಪತ್ರಿಕೆಗಳಲ್ಲಿ ನಿಧನ ವಾರ್ತೆ ಕಾಲಮ್ಮಿನಲ್ಲಿ
(ಎಲ್ಲೋ ಮೂಲೆಯಲ್ಲಿ) ಪ್ರಕಟವಾಯಿತು. ಎಲ್ಲೋ ರಸ್ತೆಯ ಮೇಲೊಂದು ಅಪಘಾತ ಸಂಭವಿಸಿದರೆ ಫೋನ್-
ಇನ್, ನೇರ ಪ್ರಸಾರ ಅಂತೆಲ್ಲ ಅರ್ಧ ಗಂಟೆಗಟ್ಟಲೇ ಪದೇ ಪದೇ ಅಪಘಾತದ ಭೀಕರ ದೃಶ್ಯ ತೋರಿಸಿ,
ವೀಕ್ಷಕರಿಗೆ ಮಾನಸಿಕ ಹಿಂಸೆ ನೀಡುವ ಟಿವಿ ವಾಹಿನಿಗಳು ಕಥೆಗಾರ ವ್ಯಾಸರನ್ನು ಮರೆತೇ
ಬಿಟ್ಟವು.
”ಪ್ರಚಾರದ ಅಬ್ಬರದಿಂದ ದೂರ ಉಳಿದು, ತಣ್ಣಗೇ ‘ಶಾಕ್’ ಕೊಡುವ ಕಥೆಗಳನ್ನು ಕೊಟ್ಟ ವ್ಯಾಸ
ಎಷ್ಟು ಜನ ಪತ್ರಕರ್ತರಿಗೆ ಗೊತ್ತು?” ಎಂದು ನಮ್ಮೂರಿನ ಸಾಹಿತಿಯೊಬ್ಬರು ಕೇಳಿದರು.
ಕಾರ್ಯಕ್ರಮ, ಪತ್ರಿಕಾಗೋಷ್ಠಿಗಳ [...]
ಕಾಗದ ಬಂದಿದೆ…
ವಾರೆವಾಹ್ ವಸುಧೇಂದ್ರ..
avani | avaniaa@yahoo.com |
idE khuShiyalli neevu vastaareyavara mattu jOgiyavaradEnaadaroo prakaTisabaaradEke?
+++
malathi S | malathishenoy@yahoo.co.in |
Congrats Vasudhendraji for spotting the winners. Way to go
+++
Santhosh Ananthapura | sansapndevu@gmail.com |
ಪ್ರಿಯ ವಸುದೆನ್ದ್ರ,
“ಕ್ಶಮೆಯಿಲ್ಲದೂರಿನಲಿ” ಇದ್ದು ನೀವು ಮಾಡುತ್ತಿರುವ ಘನ ಕಾರ್ಯವು ಹೆಮ್ಮೆ ಮತ್ತು ಅಭಿಮಾನದ ವಿಷಯ. ನಿಮ್ಮ ಸಾಹಸ ಯಾತ್ರೆ ಹೀಗೆ ಮುಂದುವರಿಯಲಿ.
ನಿಮ್ಮ ವಿಶ್ವಾಸಿ,
ಸಂತೋಷ ಅನಂತಪುರ
+++
ಸುಶ್ರುತ ದೊಡ್ಡೇರಿ
http://hisushrutha.blogspot.com/ | [...]






