ಮತ್ತೆ ಮತ್ತೆ ನೆನಪು…
ಈ ದಿನ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರಿಂದ ಪತ್ರ ಬಂತು. ಅವರ ಪುಸ್ತಕದ ಬಗ್ಗೆ ‘ದಿ ಹಿಂದೂ’ ಪತ್ರಿಕೆ ಆತ್ಮೀಯವಾಗಿ ಬರೆದಿದೆ. ಇದನ್ನು ಓದುತ್ತಿದ್ದಂತೆ ಯಾಕೆ ಗೊತ್ತಿಲ್ಲ್ಲ ಮೇಲಿಂದ ಮೇಲೆ ಶ್ರೀನಿವಾಸರಾಜು ಅವರು ನೆನಪಾದರು. ಈ ಪುಸ್ತಕ ಬಂದಾಗ ಅವರು ಇರಬೇಕಿತ್ತು ಎನಿಸಿತು. ಕನ್ನಡದ ಹೆಮ್ಮೆಯ ಚಿತ್ರಕಾರ ಪಿ ಮಹಮದ್ ಬರೆದ ಶ್ರೀನಿವಾಸರಾಜು ಚಿತ್ರಗಳನ್ನು ಗೌರವದಿಂದ ಇಲ್ಲಿ ನೀಡುತ್ತಿದ್ದೇವೆ.











ಚಿ.ಶ್ರೀನಿವಾಸ ಮೇಷ್ಟ್ರಿಗೆ ಪುಸ್ತಕ ಕಿರೀಟ…ಪಿ.ಎಂ. ಕಲ್ಪನೆ ಅದ್ಬುತ.
ಆಲದ ಮರದಡಿ ಬೇರೇನೂ ಬೆಳೆಯದು ಎಂಬ ಮಾತಿದೆ. ಸಾಹಿತ್ಯ ಸೇವೆಯೆಂಬ ಕೈಂಕರ್ಯದಲ್ಲಿ ತೊಡಿಗದ್ದ ಶ್ರೀನಿವಾಸ ಮೇಷ್ಟ್ರು ವ್ಯಕ್ತಿತ್ವದಲ್ಲಿ, ಅಕ್ಷರ ಪ್ರೀತಿಯಲ್ಲಿ, ಕಿರಿಯರೆಡೆಗಿನ ವಾತ್ಸಲ್ಯ-ಮೆಚ್ಚುಗೆಯಲ್ಲಿ ದೊಡ್ಡಆಲದ ಮರವೆ. ಅವರ ಮರವಾಗಿ ಕಿರಿ-ಮರಿ ಸಾಹಿತ್ಯ ಪಕ್ಷಿಗಳಿಗೆ ಆಸರೆ ನೀಡಿದ್ದರೆಂಬ ಮಹಮದ್ ಚಿತ್ರಣ ವಾಹ್ ಅದ್ಬುತ. ಮೂರನೆಯ ಚಿತ್ರ…
bvmahesh chandra
August 7, 2008