Archive for August, 2008
ನಾನೊಬ್ಬಳು ‘ಮಲ್ನಾಡ್ ಹುಡ್ಗಿ’
ಇಂದಿನಿಂದ ಆರಂಭ
ಪ್ರತೀ ಭಾನುವಾರ
ಕಾಡುವ ಮನಸ್ಸಿಗೆ ಕೈಯಿಡುವ ಅಂಕಣ ಮಾಲೆ-
‘ಸಿರಿ’ ಬಂದ ಕಾಲಕ್ಕೆ …
ಇದರೊಂದಿಗಿದೆ ಮೊದಲ ಬರಹ
ಇವನು ಗೆಳೆಯ-ನಲ್ಲ….
ನಾನೊಬ್ಬಳು ‘ಮಲ್ನಾಡ್ ಹುಡ್ಗಿ’
ನಾನು ಮಲೆನಾಡ ಹುಡುಗಿ. ನಮ್ಮೂರಷ್ಟು ಚಂದದ ಸ್ಥಳ ಮತ್ತೊಂದಿಲ್ಲ. ನಮ್ಮೂರ್ ಬಗ್ಗೆ ನಂಗೆ ಅಹಂಕಾರ ಅನ್ಕೊಂಡ್ರೂ ಪರ್ವಾಗಿಲ್ಲ ನೀವು.
ನನಗೆ ಸಾಹಿತ್ಯದಲ್ಲಿ ಆಸಕ್ತಿ..ಕುವೆಂಪು, ಅವ್ರ ಮಗ ಪೂ ಚಂ ತೇ, ಬಿ ಜಿ ಎಲ್ ಸ್ವಾಮಿ, ಭೈರಪ್ಪ, ಕಾರಂತ, ಬೆಳೆಗೆರೆ, ವಸುಧೇಂದ್ರ, ಕಾಯ್ಕಿಣಿ, ಜೋಗಿ, ವಿವೇಕ್ ಶಾನಭಾಗ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಮಾಸ್ತಿ ಇಷ್ಟ ಆಗ್ತಾರೆ. ಕೆ [...]
ಇವನು ಗೆಳೆಯ-ನಲ್ಲ….
‘ಸಿರಿ’ ಬಂದ ಕಾಲಕ್ಕೆ…
-ಮೃಗನಯನಿ
ಆವತ್ತು ಸಂಜೆ ಕಾಲೇಜು ಬಿಟ್ಟ ತಕ್ಷಣ ಯಾವುದೇ ಊರು ಸುತ್ತುವ ಪ್ರೋಗ್ರಾಮು ಇಲ್ಲದ್ದರಿಂದ ಟೀ ಎಂದು ಕರೆಯುವುದಕ್ಕೆ ಯಾವ ಅರ್ಹತೆಯೂ ಇಲ್ಲದ ಟೀ ಕುಡಿದು ಹ್ಯಾಮ್ಲೆಟ್ ಓದುತ್ತಾ ಕೂತಿದ್ದೆ. ಫ್ರಾನ್ಸ್ಗೆ ಹೊರಟು ನಿಂತ ಮಗನಿಗೆ ಪೊಲೋನಿಯಸ್ ಅಲ್ಲಿ ಹೇಗಿರಬೇಕು ಅನ್ನುವ ಒಂದು ಪುಟದ ಮಾತು ಓದುತ್ತಿದ್ದರೆ ನನಗೆ ಅಪ್ಪನ ನೆನಪಾಯ್ತು. ಅಷ್ಟರಲ್ಲಿ ಲಾಲಿ ದಬಾರೆಂದು ಬಾಗಿಲು ತಳ್ಳಿಕೊಂಡು ಒಳಬಂದು ಒಂದು ಮಾತಾಡದೇ ರೂಮ್ ಕ್ಲೀನ್ ಮಾಡತೊಡಗಿದಳು. ಅವಳು ಸಿಟ್ಟು ಬಂದಾಗೆಲ್ಲ ಹೀಗೆ ರೂಮ್ ಕ್ಲೀನ್ [...]
Read Full Post | Make a Comment ( 11 so far )‘ಓದು ಬಜಾರ್’ ಗೆ ಭೇಟಿ ಕೊಡಿ
ಪ್ರಸನ್ನ ಅವರ ಲೇಟೆಸ್ಟ್ ಕಾದಂಬರಿ ನನ್ನ ಗೋಪಾಲ ಬಗ್ಗೆ ಬರೆಯಲಿದ್ದಾರೆ ಜೋಗಿ
ಕುಸುಮಾ ಶಾನಬಾಗ್ ಬರೆವ ಬೀದಿಯ ಹೆಣ್ಣುಗಳ ತಳಮಳದ ಕಥೆಗಳು
ಈ ಎಲ್ಲಕ್ಕೂ ‘ಓದು ಬಜಾರ್’ ಗೆ ಭೇಟಿ ಕೊಡಿ
ಅಲೆಗಳಲ್ಲಿ ಮರೆಯಾದ ಅಂಚೆಯಣ್ಣ
-ಜಯಂತ ಕಾಯ್ಕಿಣಿ
ನಮ್ಮೆಲ್ಲರ ಅಕ್ಕರೆಯ ಅಂಚೆಯಣ್ಣ ಅಥವಾ “ಪೋಸ್ಟ್ ಮ್ಯಾನ್ ” ಬರೇ ಒಂದು ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಅವನು ಮನುಷ್ಯರಿಂದ ಮನುಷ್ಯರಿಗೆ ಅದೇನನ್ನೋ ದಾಟಿಸುವ ಮಾರುವೇಷದ ದೇವರಾಗಿರುತ್ತಾನೆ. ಸಣ್ಣ ಊರುಗಳಲ್ಲಂತೂ ಅವನು ಪ್ರತಿ ಮನೆಯ ಅಂತರಂಗದ ಸದಸ್ಯ. ಎಸ್ಸೆಸ್ಸೆಲ್ಸಿ ರಿಸಲ್ಟು, ಹೆರಿಗೆ, ಮದುವೆ, ಕೋರ್ಟು ವಾರೆಂಟು, ಸಾವು, ರೋಗ ರುಜಿನ ಎಲ್ಲವನ್ನೂ “ನಿರಪೆಕ್ಷಯೋಗ ” ದಲ್ಲಿ ಹಂಚಿಕೊಂಡು ಮನೆಯಿಂದ ಮನೆಗೆ ದಾಟಿಸುತ್ತಲೇ ಇರುವ, ಬೆವರೊರೆಸಿಕೊ೦ಡು ಓಡುತ್ತಾ ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಅಥವಾ ಹ್ಯಾ೦ಡಲ್ಲಿಗೆ ಸಿಕ್ಕಿಸಿಕೊ೦ಡು ಸೈಕಲ್ ಏರುತ್ತಿರುವಾಗಲೇ [...]
Read Full Post | Make a Comment ( 6 so far )ಇದು ‘ಬಿಗ್ ಬಜಾರ್’ ಅಲ್ಲ….
ಇದು ಬಿಗ್ ಬಜಾರ್ ಅಲ್ಲ….
ಇದು ಜನತಾ ಬಜಾರ್ ಅಲ್ಲ…
ಇದು- ‘ಓದು ಬಜಾರ್’
ಇಲ್ಲಿ ಭೇಟಿ ಕೊಡಿ
Read Full Post | Make a Comment ( None so far )ಬ್ಲಾಗ್ ಲೋಕದ ಮಹಾ ಮರ್ಜರ್
ಅವಧಿ ಹಾಗೂ ಜೋಗಿಮನೆ ಎರಡೂ ಕೈ ಕುಲುಕಿವೆ. ಅವಧಿ ನಡೆಸುತ್ತಿದ್ದ ‘ಬುಕ್ ಬಜಾರ್’ ಹಾಗೂ ಜೋಗಿ ಮನೆಯ ‘ಓದು ಜನಮೇಜಯ’ ಎರಡೂ ವಿಲೀನಗೊಂಡಿದೆ.
ಈ ಬೆಳವಣಿಗೆ ಮತ್ತೊಂದು ಮಹತ್ವದ ಬ್ಲಾಗ್ ಗೆ ದಾರಿಮಾಡಿಕೊಟ್ಟಿದೆ. ಬುಕ್ ಬಜಾರ್ ಹಾಗೂ ಓದು ಜನಮೇಜಯ ಎರಡೂ ಹೆಸರನ್ನು ಬಿಂಬಿಸುವ ‘ಓದು ಬಜಾರ್’ ಬ್ಲಾಗ್ ಲೋಕಕ್ಕೆ ಅಡಿ ಇಡಲಿದೆ. ಪುಸ್ತಕ, ಸಾಹಿತಿ, ಪುಸ್ತಕ ಲೋಕದ ಏಳುಬೀಳು, ನಮ್ಮ ನೆರೆಯ ಭಾಷೆಗಳ ಪುಸ್ತಕ ಸಾಹಸಗಳು ಯಾವುದೂ ಕೇಳಲೂ ಸಿಗದ ಪರಿಸ್ಥಿತಿಯಲ್ಲಿ ಈ ಬ್ಲಾಗ್ ಮೂಡಿ ಬರುತ್ತಿದೆ.
ಕನ್ನಡದಲ್ಲಿ [...]
ಹಳೇ ಮಂಚದ ಕಥೆಯು…
ಹಂಗಾಮ ಎಂಬ ಪತ್ರಿಕೆಯಿತ್ತು. ವೆಂಕಟರಮಣ ಗೌಡರ ಕನಸಿನ ಕೂಸದು. ಆ ಪತ್ರಿಕೆ ಎಷ್ಟೊಂದು ಬರಹಗಾರರಿಗೆ ಆಡುವ ಅಂಗಳವಾಗಿತ್ತು. ಆ ಅಂಗಳದಲ್ಲಿ ಗೌಡರೇ ಬರೆದ ಒಂದು ಕಥಾನಕ ಇಲ್ಲಿದೆ…
ವೆ0ಕಟ್ರಮಣ ಗೌಡ
ಅವಳದೇ ಕನ್ನಡಿ, ಅವಳದೇ ಮ0ಚದ ಒ0ದು ಪ್ರತ್ಯೇಕ ಪ್ರಪ0ಚದ0ತೆ ಆ ಅಷ್ಟು ದೊಡ್ದ ಮನೆಯಲ್ಲಿ ಅವಳ ಕೋಣೆ. ಊರಿನ ಎಲ್ಲಾ ಹುಡುಗಿಯರಿ0ದ ಗೌಡನ ಮಗಳು ಬೇರೆಯೆ0ಬ0ತೆ ಮಾಡಿರುವಲ್ಲಿ ಇತರ ಹಲವಾರು ಸ0ಗ0ತಿಗಳೊ0ದಿಗೆ ಆ ಕೋಣೆಯ ಪಾಲೂ ಬಹಳವೇ ಇದೆ. ತನ್ನ ಓರಗೆಯ ಎಲ್ಲ ಹುಡುಗಿಯರನ್ನು ಜಲಜಾಕ್ಷಿ ಆ ಕೊಣೆಯೊಳಗೆ [...]
‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ…’
ಬಿ ವಿ ಕಾರಂತರ ಬದುಕನ್ನು ಬಿಚ್ಚಿಟ್ಟ ಆತ್ಮ ಕಥನ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ…’ ಇಂಗ್ಲಿಶ್ ಗೆ ಅನುವಾದಗೊಂಡಿದೆ. ವೈದೇಹಿ ಹಲವು ವರ್ಷಗಳ ಕಾಲ ಬಿ ವಿ ಕಾರಂತರ ಜೊತೆ ನಡೆಸಿದ ಮಾತುಕತೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ.
ಈಗ ರಾಷ್ಟ್ರೀಯ ನಾಟಕ ಶಾಲೆ ಅದನ್ನು ಇಂಗ್ಲಿಶ್ ಗೆ ಸಜ್ಜುಗೊಳಿಸಿದೆ. ಖ್ಯಾತ ಅನುವಾದಕರುಗಳಾದ ಪ್ರೊ. ಸಿ ಎನ್ ರಾಮಚಂದ್ರನ್ ಹಾಗೂ ಪದ್ಮ ರಾಮಚಂದ್ರ ಶರ್ಮ ಇದನ್ನು ಇಂಗ್ಲಿಶ್ ತೆಕ್ಕೆಗೆ ತಂದಿದ್ದಾರೆ.
ಇದರ ಬಿಡುಗಡೆ ಕಾರಂತ ಉತ್ಸವವಾಗಿ ಬದಲಾಗಲಿದೆ. ಕಾರಂತರ ನಾಟಕಗಳ [...]
ಮತ್ತೆ ಕಾಗದ ಬಂತು..
ವಿಕ್ರಮ್ ಹತ್ವಾರ್ ಅವರ ‘ಸೇತುವೆಯ ಮೇಲೊಂದು ಹುಣ್ಣಿಮೆಯ ಆಟ’ ಲೇಖನಕ್ಕೆ ಪ್ರತಿಕ್ರಿಯೆ-
Shwetha, Hosabale
shwetha_gbhat@yahoo.co.in |
ಹೆಣ್ಣಿನ ಮನಸ್ಸಿನ ಒಳತೋಟಿಗಳನ್ನು ಬಿಚ್ಚಿಡುವ ಸಿನೆಮಾದ ಬಗ್ಗೆ ಓದಿದ ಮೇಲೆ
ಆ ಸಿನೆಮಾ ನೋಡಲೇಬೇಕೆನಿಸಿತು ; ಒಂದು ಒಳ್ಳೆಯ ಸಿನೆಮಾ ಬಗ್ಗೆ ಬರೆದು
ಪರಿಚಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ . . .
+++
HEMASHREE
http://www.smilingcolours.blogspot.com | hemzy78@gmail.com |
review ತುಂಬಾ sensitive ಆಗಿ ಇದೆ.ಎರಡೂ ಚಿತ್ರಗಳ [...]
« Previous Entries


