‘ಅವರ ಮಾತಿನಲ್ಲಿ ಸ್ವರ್ಗ ಲೋಕದ ಬೆಳೆಯಿದೆ’
‘ಅವರ ಮಾತಿನಲ್ಲಿ ಸ್ವರ್ಗ ಲೋಕದ ಬೆಳೆಯಿದೆ’ ಎಂದು ಪು ತಿ ನ ಎಕ್ಕುಂಡಿಯವರನ್ನು ಬಣ್ಣಿಸಿದ್ದರು. ಮುಗಿಲಿನ ತುಂಬ ಮುತ್ತಿನ ಬೀಜ ಬಿತ್ತುವವರೇ ಇಲ್ಲ.. ಎಂದು ಕೊರಗಿದ ಎಕ್ಕುಂಡಿ ಕನ್ನಡದ ಓದುಗರ ಎದೆಗೆ ತಂಪು ತಂದವರು.
ಸಾಹಿತಿಗಳನ್ನು ತಮ್ಮ ಅಪರೂಪದ ಮೂರನೇ ಕಣ್ಣಲ್ಲಿ ಸೆರೆ ಹಿಡಿದವರು ಎ ಎನ್ ಮುಕುಂದ್. ಎಕ್ಕುಂಡಿಯವರ ಮುಗ್ದ ನೋಟವನ್ನು ಮುಕುಂದ್ ಸೆರೆಹಿಡಿದಿರುವುದು ಹೀಗೆ. ‘ಸಂಚಯ’ದ ಡಿ ವಿ ಪ್ರಹ್ಲಾದ್ ಎಕ್ಕುಂಡಿ ಹಬ್ಬಕ್ಕೆ ಮುಂದಾಗಿದ್ದಾರೆ. ಆ ನೆಪದಲ್ಲಿ ಈ ಚಿತ್ರಗಳು ನಿಮ್ಮ ಮುಂದೆ.














