ಬರುತ್ತಿದೆ ‘ಎಕ್ಕುಂಡಿ ಹಬ್ಬ’

Posted on July 4, 2008. Filed under: ಬಾ ಕವಿತಾ, ಬುಕ್ ಬಝಾರ್ |


ಡಿ ವಿ ಪ್ರಹ್ಲಾದ್ ಒಂದು ಸಾಹಸಕ್ಕೆ ಸಜ್ಜಾಗಿದ್ದಾರೆ. ಅದು ಬೆಳ್ಳಕ್ಕಿ ಹಿಂಡನ್ನು ಹಿಡಿಯುವ ಕೆಲಸ. ಎಕ್ಕುಂಡಿ ಎಂಬ ಬೆಳ್ಳಕ್ಕಿ ಮೋಹಗಾರನ ಎಲ್ಲಾ ಕವಿತೆಗಳನ್ನು ಒಂದೆಡೆ ಕೂಡಿಸಿ ‘ಬೆಳ್ಳಕ್ಕಿ ಹಿಂಡು’  ಹೆಸರಿನಲ್ಲಿ ನೀಡುತ್ತಿದ್ದಾರೆ.

ಕಡೆಂಗೋಡ್ಲು ಶಂಕರ ಭಟ್ಟರ ಸಮಗ್ರ ಸಾಹಿತ್ಯ ಹೊರಬಂದಾಗ ಡಿ ವಿ ಪ್ರಹ್ಲಾದ್ ಗೆ ನೆನಪಾದದ್ದು ಎಕ್ಕುಂಡಿ. ಗೋವಿಂದ ಪೈ ಪ್ರತಿಷ್ಠಾನ ಅತ್ಯಂತ ಸೊಗಸಾಗಿ ಮುದ್ರಿಸಿ ಹೊರತಂದ ಈ ಪುಸ್ತಕ ಇನ್ನಿಲ್ಲದಂತೆ ಅವರನ್ನು ಸೆಳೆಯಿತು. ಚಿ ಶ್ರೀನಿವಾಸರಾಜು ಅವರ ಬಳಿ ಚರ್ಚಿಸಿದರು. ಅವರು ನೀಡಿದ ಪ್ರೋತ್ಸಾಹ ಇನ್ನಷ್ಟು ಬಲ ನೀಡಿತು. ಆ ನಂತರ ಎಕ್ಕುಂಡಿ ಕವಿತೆಗಳನ್ನು ಒಂದೆಡೆ ಕೂಡಿಸಿ ತರುವಂತೆ ಕನ್ನಡ ಪುಸ್ತಕ ಪ್ರಾಧಿಕಾರ, ಖಾಸಗಿ ಪ್ರಕಾಶಕರ ಬೆನ್ನು ಹತ್ತಿದರು. ಆಮೇಲೆ ಇವೆಲ್ಲಾ ಸುಮ್ಮನೆ ಆಗದ ಕೆಲಸ ಎನಿಸಿ ಒಂದು ಬೆಳ್ಳಂಬೆಳಗ್ಗೆ ಮುದ್ರಣಾಲಯ ದತ್ತ   ಗಟ್ಟಿ ಮನಸ್ಸಿನಿಂದ ನಡೆದರು.

ಒಂದು ವಿಶ್ವವಿದ್ಯಾಲಯ ಮಾಡದ, ಒಂದು ಸರ್ಕಾರಿ ಸಂಸ್ಥೆ ನೆನಪಿಸಿಕೊಳ್ಳದ ವಿಶೇಷ ಕೆಲಸವನ್ನು ಪ್ರಹ್ಲಾದ್ ಮಾಡಿದ್ದಾರೆ. 500 ಕ್ಕೂ ಹೆಚ್ಚು ಪುಟಗಳ ಈ ಪುಸ್ತಕ ಎಕ್ಕುಂಡಿಯವರ ಹಸ್ತಾಕ್ಷರ, ಸಹಿ, ಕವಿತೆ, ಅವರ ಸಂಕಲನಕ್ಕೆ ಪೇಜಾವರ ಮಠಾಧೀಶರೂ ಸೇರಿದಂತೆ ಎಲ್ಲರೂ ಬರೆದಿರುವ ಮುನ್ನುಡಿ, ಎಕ್ಕುಂಡಿಯವರ ಬದುಕು ನಡೆದು ಬಂದ ಹಾದಿ ಎಲ್ಲವನ್ನೂ ಒಟ್ಟು ಮಾಡಿದ್ದಾರೆ. ಎ ಎನ್ ಮುಕುಂದ್ ಅವರ ವಾಹ್! ಎನಿಸುವ ಫೋಟೋಗಳಂತೂ ಎಕ್ಕುಂಡಿಯವರನ್ನೇ ತಂದು ಎದುರಿಗೆ ನಿಲ್ಲಿಸುತ್ತದೆ.

ಈ ಮರೆಯಲಾಗದ ಪುಸ್ತಕವನ್ನು ಯು ಆರ್ ಅನಂತಮೂರ್ತಿ ಅವರು ಜುಲೈ 27 ರಂದು ಸೆಂಟ್ರಲ್ ಕಾಲೇಜ್ ನ ಸೆನೆಟ್ ಹಾಲ್ ನಲ್ಲಿ ಓದುಗರ ಕೈಗಿಡಲಿದ್ದಾರೆ. ಕನ್ನಡದ ೧೫ ಮಹತ್ವದ ಕವಿಗಳು ಎಕ್ಕುಂಡಿ ಕವಿತೆ ವಾಚಿಸಲಿದ್ದಾರೆ. ಖ್ಯಾತ ಶಿಲ್ಪಿ ವೆಂಕಟಾಚಲಪತಿ ಅವರು ಎಕ್ಕುಂಡಿ ಶಿಲ್ಪಾ ಸ್ಮರಣಿಕೆ ರೂಪಿಸಿದ್ದಾರೆ. 
ಪುಸ್ತಕದ ಬೆಲೆ ೩೫೦ ರೂ. ಪುಸ್ತಕ ಬಿಡುಗಡೆಗೆ ಮುಂಚೆಯೇ ಬುಕ್ ಮಾಡಿದಾರೆ ೧೦೦ ರೂ ರಿಯಾಯಿತಿ. ಪುಸ್ತಕ ಬೇಕಾದಲ್ಲಿ avadhi.pusthaka@gmail.com ಮೇಲ್ ಮಾಡಿ.

Make a Comment

Make A Comment: ( None so far )

blockquote and a tags work here.

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    July 2008
    M T W T F S S
    « Jun   Aug »
     123456
    78910111213
    14151617181920
    21222324252627
    28293031  
  • ತಿಂಗಳ ಕಂತು

  • a

  • Twitter Updates

    • ಲಂಕೇಶ್ ಅನುವಾದಿಸಿದ ಕವಿತೆಗಳು: ಚರ್ಚ್ ಒಂದರಲ್ಲಿ ಅರ್ಚಕನಾಗಿದ್ದ ಜಾನ್ ಡನ್ ಎಂಬ ಇಂಗ್ಲಿಷ್ ಕವಿ ಬರೆದ ಬಹುತೇಕ ಕವಿತೆಗಳ ವಸ್ತು `ಪ್ರ.. http://tinyurl.com/ndf62e 7 minutes ago
    • ಇಳಾ ಸರಹದ್ದು: http://tinyurl.com/oxy23j 1 day ago
    • ಸುಳಿಯಂಚಿನಲ್ಲಿ…: ರಮೇಶ್ ಹಿರೆಜಂಬೂರು ಅವರ ಕಥಾ ಸಂಕಲನ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಎಚ್ ಎಸ್ ದೊರೆಸ್ವಾಮಿ, ಬರಗೂರು ರಾ.. http://tinyurl.com/mee2ja 1 day ago
    • ಕೋಮುಗಲಭೆ ಮತ್ತು ಮಾಧ್ಯಮ: -ಶ್ರೀ ಕನ್ನಡ ಜರ್ನಲಿಸ್ಟ್ಸ್ ಕೋಮುಗಲಭೆಯ ಸಮಯ ವರದಿಗಾರಿಕೆ ಹೇಗಿರಬೇಕು ಅಂತ ಒಂದಿಷ್ಟು ನಿಯಮಾವಳಿಗಳು ಪತ್ರ.. http://tinyurl.com/lz4e3l 2 days ago
    • ಸುಬ್ಬಣ್ಣ ನೆನಪು: http://tinyurl.com/mrs3na 2 days ago

Liked it here?
Why not try sites on the blogroll...