ವೆಬ್ ವಿಹಾರ-ಅವಕಾಶ ಅಪಾರ

Posted on July 3, 2008. Filed under: ಫ್ರೆಂಡ್ಸ್ ಕಾಲೊನಿ, ಬುಕ್ ಬಝಾರ್ |

ಪ್ರಿಯರೆ,

ನನ್ನ ಹೊಸ ಪುಸ್ತಕಗಳು – ‘ವೆಬ್ ವಿಹಾರ’ ಹಾಗೂ ‘ಅವಕಾಶ ಅಪಾರ’ – ಬರುವ ಜುಲೈ ೨೦ರಂದು
ಸಂಜೆ ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್
ಕಲ್ಚರ್‌ನಲ್ಲಿ ಬಿಡುಗಡೆಯಾಗಲಿವೆ.

ದಯವಿಟ್ಟು ಈ ಕಾರ್ಯಕ್ರಮಕ್ಕೆ ಬನ್ನಿ.

ಬಿಡುಗಡೆಯಾಗುತ್ತಿರುವ ಪುಸ್ತಕಗಳ ಪರಿಚಯ ಹೀಗಿದೆ:

೧. ವೆಬ್ ವಿಹಾರ – ಅಂತರಜಾಲ ಲೋಕಕ್ಕೊಂದು ಬೆಳಕಿಂಡಿ
ಇದು ಅಂತರಜಾಲ (ಇಂಟರ್ ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (WWW) ಸಂಕ್ಷಿಪ್ತ ಪರಿಚಯ
ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಪುಸ್ತಕ. ಮಾಹಿತಿ
ಎಂದರೇನು ಎಂಬಲ್ಲಿಂದ ಪ್ರಾರಂಭಿಸಿ ಗಣಕ ಜಾಲಗಳು, ಅಂತರಜಾಲದ ಹುಟ್ಟು, ವಿಶ್ವವ್ಯಾಪಿ
ಜಾಲ ಬೆಳೆದ ಬಗೆ, ಇಮೇಲ್, ಬ್ಲಾಗಿಂಗ್, ಇ-ಶಾಪಿಂಗ್, ಆನ್ ಲೈನ್ ಬ್ಯಾಂಕಿಂಗ್,
ಬ್ಲಾಗಿಂಗ್, ವಿಶ್ವವ್ಯಾಪಿ ಜಾಲವನ್ನು ಕಾಡುತ್ತಿರುವ ಸಮಸ್ಯೆಗಳು (ವೈರಸ್, ಫಿಷಿಂಗ್,
ಮಾಲ್‌ವೇರ್, ಸ್ಪಾಮ್ ಇತ್ಯಾದಿ )ಮುಂತಾದ ಅನೇಕ ವಿಷಯಗಳನ್ನು ಇದು ವಿವರಿಸುತ್ತದೆ.
ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಸ್ಥಿತಿಗತಿಗಳ ಬಗೆಗೂ ಬಹಳಷ್ಟು ಮಾಹಿತಿ ಇದೆ. ಶ್ರೀ
ನಾಗೇಶ ಹೆಗಡೆಯವರು ಮುನ್ನುಡಿ ಬರೆದಿದ್ದಾರೆ.

೨. ಅವಕಾಶ ಅಪಾರ
ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ನಾನು
ಉದ್ಯೋಗ ವಿಜಯಕ್ಕೆ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ. ಅಗತ್ಯವಿದ್ದ ಕಡೆ ಇತ್ತೀಚಿನ
ಮಾಹಿತಿ ಸೇರಿಸಲು ಲೇಖನಗಳನ್ನು ಪರಿಷ್ಕರಿಸಿದ್ದೇನೆ. ಒಟ್ಟು ಮೂವತ್ತಾರು ಲೇಖನಗಳಿರುವ
ಈ ಪುಸ್ತಕಕ್ಕೆ ಡಾ. ಯು. ಬಿ. ಪವನಜರ ಮುನ್ನುಡಿ ಇದೆ.

ಧನ್ಯವಾದಗಳು.

ನಿಮ್ಮ ಆಗಮನದ ನಿರೀಕ್ಷೆಯಲ್ಲಿ,

ಶ್ರೀನಿಧಿ
+91 98866 74001

Make a Comment

Make A Comment: ( 1 so far )

blockquote and a tags work here.

One Response to “ವೆಬ್ ವಿಹಾರ-ಅವಕಾಶ ಅಪಾರ”

RSS Feed for ಅವಧಿ Comments RSS Feed

All the Best Shreenidhi


Where's The Comment Form?

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    July 2008
    M T W T F S S
    « Jun   Aug »
     123456
    78910111213
    14151617181920
    21222324252627
    28293031  
  • ತಿಂಗಳ ಕಂತು

  • a

  • Twitter Updates

    • ಲಂಕೇಶ್ ಅನುವಾದಿಸಿದ ಕವಿತೆಗಳು: ಚರ್ಚ್ ಒಂದರಲ್ಲಿ ಅರ್ಚಕನಾಗಿದ್ದ ಜಾನ್ ಡನ್ ಎಂಬ ಇಂಗ್ಲಿಷ್ ಕವಿ ಬರೆದ ಬಹುತೇಕ ಕವಿತೆಗಳ ವಸ್ತು `ಪ್ರ.. http://tinyurl.com/ndf62e 8 minutes ago
    • ಇಳಾ ಸರಹದ್ದು: http://tinyurl.com/oxy23j 1 day ago
    • ಸುಳಿಯಂಚಿನಲ್ಲಿ…: ರಮೇಶ್ ಹಿರೆಜಂಬೂರು ಅವರ ಕಥಾ ಸಂಕಲನ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಎಚ್ ಎಸ್ ದೊರೆಸ್ವಾಮಿ, ಬರಗೂರು ರಾ.. http://tinyurl.com/mee2ja 1 day ago
    • ಕೋಮುಗಲಭೆ ಮತ್ತು ಮಾಧ್ಯಮ: -ಶ್ರೀ ಕನ್ನಡ ಜರ್ನಲಿಸ್ಟ್ಸ್ ಕೋಮುಗಲಭೆಯ ಸಮಯ ವರದಿಗಾರಿಕೆ ಹೇಗಿರಬೇಕು ಅಂತ ಒಂದಿಷ್ಟು ನಿಯಮಾವಳಿಗಳು ಪತ್ರ.. http://tinyurl.com/lz4e3l 2 days ago
    • ಸುಬ್ಬಣ್ಣ ನೆನಪು: http://tinyurl.com/mrs3na 2 days ago

Liked it here?
Why not try sites on the blogroll...