Archive for February 27th, 2008
ಸುಗತ ಹ್ಯಾಸ್ ಅನ್ ‘ಔಟ್ಲುಕ್’
ಸುಗತ ಶ್ರೀನಿವಾಸರಾಜು- ಹೆಸರೇ ಸೂಚಿಸುವಂತೆ ಅರ್ಧ ಅಪ್ಪನ ಗುಣವನ್ನೇ ಹೊತ್ತ ಹುಡುಗ. ‘ನಮ್ಮೊಡನಿಲ್ಲದೆಯೂ ನಮ್ಮೊಡನಿರುವ’ ಚಿ ಶ್ರೀನಿವಾಸರಾಜು ಅವರ ಮಗ. ಬಹುಶ ಹೀಗೆ ಪರಿಚಯಿಸುವುದು ಸರಿಯಲ್ಲವೇನೋ. ಇದನ್ನು ಶ್ರೀನಿವಾಸರಾಜು ಅವರೂ ಒಪ್ಪುತ್ತಿರಲಿಲ್ಲ. ಅಪ್ಪನ ಹೆಸರು ಬಳಸಿ ಇವರ ಯಾವ ಮಕ್ಕಳೂ ಬೆಳೆಯಲಿಲ್ಲ.
ಸುಗತ ಇಂದು ರಾಷ್ಟ್ರ ಮಟ್ಟದಲ್ಲಿ ಪತ್ರಿಕೋದ್ಯಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾನೆ. ಡೆಕ್ಕನ್ ಹೆರಾಲ್ಡ್, ಟೆಲಿಗ್ರಾಫ್ ಮೂಲಕ ಈಗ ಖ್ಯಾತ ಔಟ್ಲುಕ್ ವಾರಪತ್ರಿಕೆಯ ಕುಟುಂಬದ ಸದಸ್ಯ. ಪತ್ರಿಕೋದ್ಯಮ ಸಿನಿಕರ ತಾಣವಾಗುವುದು ಸುಲಭ. ಏಕೆಂದರೆ ಎಲ್ಲರೂ ತಾವೇ ಜಗತ್ತಿನ [...]
ಇಲ್ಲಿದೆ ‘ಕ್ಲಿಕ್’ ಕೈಚಳಕ
ಅಪೂರ್ವ ಫೋಟೋಗಳನ್ನು ನೋಡುವ ಒಂದು ಅವಕಾಶ ಇದೆ. ಆದರೆ ಅದು ಕೇವಲ ಅರ್ಧ ದಿನ ಮಾತ್ರ. ಆದ್ದರಿಂದ ಯೋಚನೆ ಮಾಡುವ ಪ್ರಶ್ನೆಯೇ ಇಲ್ಲ. ಹೋಗಿ ನೋಡಿ. ಪುಸ್ತಕದಲ್ಲಿ ನಿಮ್ಮ ಅಭಿಪ್ರಾಯ ಬರೆದು ಬನ್ನಿ
ಈ ಹಿಂದೆ ‘ಅವಧಿ’ ಛಾಯಾಗ್ರಾಹಕ ಡಿ ಜಿ ಮಲ್ಲಿಕಾರ್ಜುನ್ ಅವರ ಫೋಟೋಗಳನ್ನು ಪ್ರಕಟಿಸಿದ್ದು ನಿಮ್ಮ ಮನಸ್ಸಿನಿಂದ ಅಳಿಸಿಹೋಗಿಲ್ಲ ಎಂಬುದು ನಮಗೆ ಗೊತ್ತು. ಬೆಂಗಳೂರಿನ ಲಾಲಭಾಗ್ ಪಶ್ಚಿಮ ದ್ವಾರದ ಬಳಿ ಇರುವ ಆರ್ ವಿ ಟೀಚರ್ಸ್ ಕಾಲೇಜ್ನಲ್ಲಿ ಬೆಳಗ್ಗೆ ೧೦ ರಿಂದ ೨ ಗಂಟೆವರೆಗೆ ಮಾರ್ಚ್ [...]
ಹಸಿರು ಮುಕ್ಕಳಿಸಲು ತಾಖತ್ತು
ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣನವರ ಬಗ್ಗೆ ನಾವು ಬರೆದ ಬರಹಕ್ಕೆ ಅವರ ಆತ್ಮೀಯರೂ, ಪ್ರಕಾಶನದ ಒಂದು ಭಾಗವೇ ಆಗಿಹೋಗಿರುವ ಜಿ ಎನ್ ಮೋಹನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಚೆನ್ನಬಸವಣ್ಣನವರ ಪ್ರೀತಿಯ ಬಗ್ಗೆ ಇನ್ನಷ್ಟು ತಿಳಿಯಲು ಇದು ಅನುಕೂಲ.
ಲೋಹಿಯಾ ಪ್ರಕಟಣೆಗಳು
ಚನ್ನಬಸವಣ್ಣ ಅವರ ಆತ್ಮೀಯತೆಯ ರುಚಿ ಉಂಡವರಲ್ಲಿ ನಾನೂ ಒಬ್ಬ. ನನಗೆ ಅವರ ಪರಿಚಯ ಇರಲಿಲ್ಲ. ಅವರಿಗೂ. ನವಕರ್ನಾಟಕ ಆಗ ತಾನೆ ನಾನು ಮಾಧ್ಯಮವನ್ನು ಡಂಕೆಲ್ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ನೋಡಿದ ೨ ಪುಸ್ತಕಗಳನ್ನು ಪ್ರಕಟಿಸಿತ್ತು. ಚನ್ನಬಸವಣ್ಣ ಅವರಿಗೆ ಇಷ್ಟೇ ಸಾಕು. [...]
ಒಂದು ಚಾರಿತ್ರಿಕ ನಿವೇದನೆ
“ಗಾಳಿ ಬೆಳಕು”
ನಟರಾಜ್ ಹುಳಿಯಾರ್
ಆಸ್ಟ್ರೇಲಿಯಾದ ಪಾರ್ಲಿಮೆಂಟಿನಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಕೆವಿನ್ ರೆಡ್ ಆಸ್ಟ್ರೇಲಿಯಾದ ಮೂಲನಿವಾಸಿಗಳ ಮೇಲೆ ಈವರೆಗಿನ ಸರ್ಕಾರಿ ನೀತಿಗಳು ನಡೆಸಿರುವ ಹಲ್ಲೆಗಾಗಿ ಮೂಲನಿವಾಸಿಗಳ ಕ್ಷಮೆ ಕೋರಿದರು. ಈ ಮಾತನ್ನು ಆಸ್ಟ್ರೇಲಿಯಾದ ಬೇರೆ ಬೇರೆ ಕಡೆಗಳಲ್ಲಿ ಕೇಳಿಸಿಕೊಂಡ ಮೂಲನಿವಾಸಿಗಳ ಕಣ್ಣಲ್ಲಿ ಕೃತಜ್ಞತೆಯ ಕಣ್ಣೀರ್ಇತ್ತು.
“ತಾನು ಯಾಕೆ ಈ ಕ್ಷಮೆ ಕೋರುತ್ತಿದ್ದೇನೆ?” ಎಂಬ ಪ್ರಶ್ನೆ ಹಾಕಿಕೊಳ್ಳುತ್ತಾ, ಕೆವಿನ್ ತಾನು ಬಲ್ಲ ಒಬ್ಬ ಮಹಿಳೆಯ ಕಥೆ ಹೇಳಿದರು. ಅದು ಎಂಬತ್ತು ವರ್ಷ ದಾಟಿರುವ, ಅಪಾರ ಜೀವಂತಿಕೆಯ, ತಮಾಷೆಯ ಕಥೆಗಳ ನಾನಾ ಫಜೋಳ ಕಥೆ; [...]
ಅಕ್ಷರ ಪ್ರೀತಿಯ ‘ಕನ್ನಡ ಟೈಮ್ಸ್’
ಒಂದು ಕನಸು ಹಿಡಿದು ನಡೆವವರ ದಾರಿಯ ಯಶಸ್ಸು ಎಲ್ಲರಿಗೂ ಖುಷಿಯನ್ನು, ಭರವಸೆಯನ್ನು ತುಂಬಿಕೊಡುತ್ತದೆ. ನಮ್ಮೆಲ್ಲರ ಪ್ರೀತಿಯ ಕನ್ನಡ ಟೈಮ್ಸ್ ವಾರಪತ್ರಿಕೆ ಒಂದು ವರ್ಷ ಪೂರೈಸಿರುವುದು ಅಂಥ ಭಾವನೆಯನ್ನು ತಂದಿದೆ.
ಕನ್ನಡ ಟೈಮ್ಸ್ ಒಂದು ಪುಟ್ಟ ಗುಂಪಿನ ಸಾಹಸ. ಆದರೆ ಇಡೀ ನಾಡಿನ ಜನತೆಯನ್ನು ಅತ್ಯಲ್ಪ ಸಮಯದಲ್ಲೇ ಗೆಲ್ಲುವಲ್ಲಿ ಮಾತ್ರ ಅದು ಹಿಂದುಳಿಯಲಿಲ್ಲ. ಇದಕ್ಕೆ ಕಾರಣವಾಗಿರುವುದು ಅದರ ನಿಲುವು ಮತ್ತು ಆರೋಗ್ಯಕರ ಚರ್ಚೆಯನ್ನು ನಡೆಸಿಕೊಂಡು ಹೋಗುವುದರ ಕಡೆಗಿನ ಬದ್ಧತೆ.
ಟ್ಯಾಬ್ಲಾಯ್ಡ್ ಆಕಾರದಲ್ಲಿರುವ, ಆದರೆ ಮ್ಯಾಗಝಿನ್ ಸ್ವರೂಪದ ಪತ್ರಿಕೆ ಇದು. ಕ್ರೈಮು, ಹಿಂಸೆಯ [...]







