Archive for February 22nd, 2008
ಓಹ್! ಓದಲೇ ಬೇಕಾದ ಪುಸ್ತಕ
‘ತೊತ್ತೋ ಚಾನ್’ ಓದಿದ್ದೀರಾ? ಇಲ್ಲವಾ. ಛೆ! ಅದು ಹೇಗೆ ಸಾಧ್ಯ. ‘ತಾರೆ ಜಮೀನ್ ಪರ್’ ನೋಡಿ ಎಷ್ಟು ಒಳ್ಳೆಯ ಸಿನೆಮಾ ಎಂದು ಸಂತೋಷಪಟ್ಟೆವಲ್ಲಾ, ಅದಕ್ಕೂ ಮೀರಿದ ಕಥೆ ತೆತ್ಸುಕೋ ಕುರೋಯಾನಾಗಿ ಅವರ ತೊತ್ತೋ-ಚಾನ್. ಇದು ಸಮಸ್ಯೆಯಿಂದ ನರಳುವ ಮಗುವಿನ ಬಗ್ಗೆ ಖಂಡಿತಾ ಅಲ್ಲ. ಒಂದು ಚಟುವಟಿಕೆಯ ಪುಟಾಣಿಯ ಬಗ್ಗೆ.
ಬಿ ವಿ ಕಾರಂತರು ನಿರ್ದೇಶಿಸಿದ ರವೀಂದ್ರನಾಥ ಟ್ಯಾಗೂರರ ‘ಪಂಜರ ಶಾಲೆ’ ನಾಟಕ ನೋಡಿದ್ದೀರಾ? ಶಿಕ್ಷಣ ಈಗ ಕೇವಲ ಗಿಳಿಪಾಠ. ಅದನ್ನು ಕಲಿಯದೆ ಮನಸ್ಸು ನಾಲ್ಕು ಗೋಡೆಯಾಚೆ ಜಿಗಿದರೆ ಆ [...]
ಆಹಾ ಅಪಾರ…
ಅಪಾರರ ಡಿಸೈನ್ ನೋಡುವುದೇ ಒಂದು ಹಬ್ಬ. ಕವಿಗಳಿಗಂತೂ ಥ್ರಿಲ್. ಅಪಾರ ಅವರು ಡಿಸೈನ್ ಮಾಡಿದ ಪುಸ್ತಕದ ಮುಖಪುಟಗಳನ್ನೇ ನೋಡಿದವರಿಗೆ ಇಲ್ಲಿದೆ ಅವರ ಆಹ್ವಾನ ಪತ್ರಿಕೆಗಳ ಡಿಸೈನ್ ಗಳು.
ಸುಮಕೆ ಸೌರಭ ಬರುವ ಗಳಿಗೆ…
‘ಡೋರ್ ನಂ ೧೪೨’ -ಅಂಕಣದಲ್ಲಿ ಬಹುರೂಪಿ ಅವರು ಈ ಬಾರಿ ಬರೆದ ‘ಬಿಚ್ಚಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು’ ಲೇಖನಕ್ಕೆ ನಮ್ಮ ನಡುವಿನ ಮುಖ್ಯ ಲೇಖಕಿ, ಬ್ಲಾಗ್ ಮಂಡಲದ ಸದಸ್ಯೆ ಟೀನಾ ಪ್ರತಿಕ್ರಿಯೆ ನೀಡಿದ್ದಾರೆ. ಇದು ಇನ್ನಷ್ಟು ವಿಷಯಗಳನ್ನು ಹಂಚಿಕೊಳ್ಳಲು ಬಹುರೂಪಿಯವರನ್ನೂ ಪ್ರೇರೇಪಿಸಿದೆ.
ಈ ಚರ್ಚೆಗೆ ನೀವೂ ದನಿಗೂಡಿಸುವುದು ಅಗತ್ಯ ಎಂದು ‘ಅವಧಿ’ಗೆ ಅನಿಸುತ್ತಿದೆ. ದಯವಿಟ್ಟು ಪ್ರತಿಕ್ರಿಯಿಸಿ. ಚರ್ಚೆ ಬೆಳಸೋಣ. ಮೈಲ್ ಮಾಡಿ : avadhi.pusthaka@gmail.com ಅಥವಾ ಕಾಮೆಂಟ್ಸ್ ಅಂಕಣದಲ್ಲಿ ನೇರವಾಗಿ ಬರೆಯಿರಿ.
Tina | tinashashikanth@gmail.com |
ನಿಜವಾಗ್ಲೂ! ನೀವು [...]
ಸಂತರನ್ನು ಕಂಡೊಡನೆ ಸಂದೇಹಪಟ್ಟವರು…
“ಪ್ರೇಮದಂತೆಯೇ ವಿಶ್ವಾಸ ಕೂಡ; ಅದು ಬತ್ತಿಹೋಗುತ್ತದೆ, ಇಲ್ಲವಾಗುತ್ತದೆ. ಅನೇಕಾನೇಕ ಆಕಾಂಕ್ಷೆ, ತೆವಲುಗಳೊಂದಿಗೆ ಕೆಲಸ ಮಾಡುವ ಮನುಷ್ಯ ಶತ್ರುವಾಗುತ್ತಾನೆ, ದ್ರೋಹಿಯಾಗುತ್ತಾನೆ, ಕೊಲೆ ಮಾಡಲೂ ಹೇಸದವನಾಗುತಾನೆ. ಇದು ಸ್ವಾಭಾವಿಕ ಅನ್ನುವುದನ್ನು ಅರಿತರೆ ಮಾತ್ರ ಸಿನಿಕನಾಗುವುದು ತಪ್ಪುತ್ತದೆ.”
—————————————————
ನಟರಾಜ್ ಹುಳಿಯಾರ್
ಕೇಡಿನ ಜೊತೆ ಹೋರಾಡುವ ಶಕ್ತಿಗಳು ಕೇಡಿನಲ್ಲಿ ಲೀನವಾಗಿಬಿಡುವ ವಿಚಿತ್ರವನ್ನು ಲಂಕೇಶ್ ಅನೇಕ ಕಡೆ ಸೂಚಿಸುತ್ತಾರೆ. “ಅಮಾನುಷರೊಂದಿಗೆ ಹೋರಾಡುವ ವ್ಯಕ್ತಿ ಕೊನೆಗೆ ತಾನೇ ಅಚೀನುಷನಾಗದಂತೆ ನೋಡಿಕೊಳ್ಳಬೇಕು ಆಳದ ಕತ್ತಲೆಯನ್ನು ನಾವು ಕಣ್ಣಿಟ್ಟು ನೋಡಿದರೆ, ಆ ಕತ್ತಲ ಲೋಕ ನಮ್ಮೊಳಗೂ ತೀಕ್ಷ್ಣವಾದ ಕಣ್ಣಿಟ್ಟು ನೋಡುತ್ತದೆ” ಎನ್ನುತ್ತಾನೆ [...]







