Archive for February 14th, 2008
ಕಚ್ಚಿದ ೨೪ ಫ್ರೇಮ್ …
ಅಭಯ ಸಿಂಹ ಆರ್ಥಾತ್ ಅಭಯ. ಪೂನಾದ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶನ ಕಲಿತು ಬಂದ ಈತ ಈಗಾಗಲೇ ಗಾಂಧಿನಗರದಲ್ಲಿ ಹೆಜ್ಜೆ ಊರಿದ್ದಾನೆ. ‘ಗುಬ್ಬಚ್ಚಿಗಳು’ ಈತನ ನಿರ್ದೇಶನದ ಮೊದಲ ಚಿತ್ರ.
ಕಡಲ ದಂಡೆಯಿಂದ ಎದ್ದು ಬಂದ ಅಭಯ ಹಿಡಿದ ಪಟ್ಟು ಬಿಡುವ ಹುಡುಗನಲ್ಲ. ಥೇಟ್ ತಂದೆಯಂತೆ, ಅಥವಾ ಅಜ್ಜನಂತೆ. ಜಿ. ಟಿ. ನಾರಾಯಣರಾಯರ ಮೊಮ್ಮಗ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ನ ಜಿ ಎನ್ ಅಶೋಕವರ್ಧನ -ದೇವಕಿಯವರ ಮಗ. ಇಬ್ಬರೂ ಈತನಲ್ಲಿ ಹುಟ್ಟು ಹಾಕಿದ ಈ ಗುಣವೇ ಈತನನ್ನು ಈಗ [...]
ಹಳೆಯ ನೆನಪೇ…..
ಚಿತ್ರ: ಜಿ ಎನ್ ಮೋಹನ್
ಎಲ್ಲ ಮರೆತಿರುವಾಗ
ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ
ಹಳೆಯ ನೆನಪೇ…..
‘ಚೆ’ ನೆನಪಲ್ಲಿ ನನ್ನೊಳಗಿನ ಹಾಡು ಕ್ಯೂಬಾ
ನಾನು ಜಿ ಎನ್ ಮೋಹನ್ ಅವರ ನನ್ನೊಳಗಿನ ಹಾಡು ಕ್ಯೂಬಾ ಓದಿದಾಗ ಒಳಗಿನ ಹೂರಣದಷ್ಟೇ ಕಾಡಿದ್ದು ಅದರ ಮುಖಪುಟ. ಇಂದಿಗೂ ನನ್ನ ಅಚ್ಚುಮೆಚ್ಚಿನ ಪುಸ್ತಕ ಯಾವುದೆಂದು ಕೇಳಿದರೆ ಅದು ‘ನಹಾಕ್ಯೂ’ ನೆ. ಕ್ಯುಬಾದಂತಹ ಪುಟ್ಟ ರಾಷ್ಟ್ರ ಕಿರಾತಕ ಅಮೆರಿಕಾಗೆ ಸೆಡ್ಡ ಹೊಡೆದು ನಿಂತದ್ದಿದೆಯಲ್ಲ ನಿಜಕ್ಕೂ ಅದು ಗ್ರೇಟ್. ಇನ್ನು ನನ್ನ ‘ಚೆ’. ಆತ ನಿಜಕ್ಕೂ ನನ್ನ ಹೀರೋ. ಆತನ ಸಿಗಾರಿನ ಹುಚ್ಚು, ಆಸ್ತಮಾದ ನಂಟು, ಬಂದೂಕಿನ ನಡುವೆಯೇ ಹುಟ್ಟಿದ ಹೋರಾಟ ‘ಚೆ’ ನನ್ನು ನನ್ನಂಥವರ ಮನಸ್ಸಿಗೆ ತಂದು [...]
Read Full Post | Make a Comment ( None so far )ರಂಗದಿಂದಾಚೆ, ಒಂದಿಷ್ಟು ದೂರ…
ಇಕ್ಬಾಲ್ ಎಂದರೆ ನೆನಪಾಗುವುದು ನಾಟಕ. ರಂಗದ ಮೇಲೆ ಒಂದು ಭಿನ್ನ ಅನುಭವವನ್ನೇ ಕಟ್ಟಿಕೊಡುವ ಇಕ್ಬಾಲ್ ರಂಗದ ಆಚೆಗೂ ಜಾದೂ ನಡೆಸುತ್ತಾರೆ. ಇವರ ರೇಖೆಗಳು ಹತ್ತು ಹಲವು ಅನುಭವಗಳನ್ನು ನಮ್ಮ ಒಡಲಲ್ಲಿ ತಂದು ಕೂರಿಸುತ್ತದೆ. ದೇಸಿ ಸಂಸ್ಕೃತಿ ಹರಡಲೆಂದೇ ‘ಗುಡಿ’ ಹೆಸರಿನಲ್ಲಿ ವಿಶಿಷ್ಟ ಮಳಿಗೆ ತೆರೆದಿದ್ದಾರೆ. ಇಕ್ಬಾಲ್ ಆ ಮಳಿಗೆಗೂ ನೀಡಿರುವ ರೇಖಾ ಸ್ಪರ್ಶ ನೋಡುವಂತಿದೆ. ಇವರ ರೇಖೆಗಳು ಜಯಂತ್ ಅವರ ‘ಶಬ್ದ ತೀರ’ ದ ಮುಖಪುಟವನ್ನೂ ಅಲಂಕರಿಸಿದೆ. ಇಕ್ಬಾಲ್ ರೇಖೆಗಳ ಒಂದು ನೋಟ ಇಲ್ಲಿದೆ.
Read Full Post | Make a Comment ( None so far )






